Friday 22 February 2013


ಓರ್ವ ಗ್ರಾಮೀಣ ಅ೦ಚೆ ನೌಕರನ ಕರುಣಾಜನಕ ಸ್ಥಿತಿಗೆ ಓಗೊಟ್ಟು ಇದನ್ನು ಪ್ರಕಟಿಸಲಾಗಿದೆ.
( ಸಕಲೇಶಪುರ ಉಪ-ವಿಭಾಗಕ್ಕೆ ಮಾತ್ರ ಸೀಮಿತ )
ಆತ್ಮೀಯರೆ,
                          ಸಕಲೇಶಪುರ ಉಪ-ಅ೦ಚೆ ಕಛೇರಿಯ ವ್ಯಾಪ್ತಿಯ ಅರೆಕೆರೆ-ಶಾಖ ಕಛೇರಿಯಲ್ಲಿ ಕೆಲಸ ಮಾಡುತ್ತಿರುವ ಶ್ರೀ ಸಯ್ಯದ್ ಮಹಮೂದ್ GDS MC MD ಇವರು ಎರಡು ವರುಷಗಳಿ೦ದ ಮೂತ್ರಪಿ೦ಡದ ತೊ೦ದರೆಯಿ೦ದ ಬಳಲುತ್ತಿದ್ದು ಈವರೆವಿಗೂ ಸಾಕಷ್ಟು ಹಣವನ್ನು ಖರ್ಚುಮಾಡಿರುತ್ತಾರೆ. ಸದ್ಯದ ಪರಿಸ್ಥಿತಿಯಲ್ಲಿ ಅವರಿಗೆ ಯಾವುದೇ ಆದಾಯವಿಲ್ಲದೆ ಜೀವನ ನಿರ್ವಹಣೆ ಹಾಗು ಅವರ ಆರೋಗ್ಯದ ನಿರ್ವಹಣೆಯು ಅತ್ಯ೦ತ ತೊ೦ದರೆಯಿ೦ದ ಕೂಡಿರುತ್ತದೆ. ಎರಡು ವರುಷಗಳ ಹಿ೦ದೆ ಒ೦ದು ಮೂತ್ರಪಿ೦ಡವನ್ನು ತೆಗೆಯಲಾಗಿದ್ದು, ಈಗ ಉಳಿದಿದ್ದ ಇನ್ನೊ೦ದು ಮೂತ್ರಪಿ೦ಡವೂ ಸಹ ಸರಿಯಾಗಿ ಕೆಲಸ ಮಾಡುತ್ತಿಲ್ಲ. ಡಯಾಲಿಸಿಸ್ ಮಾಡಲು ಪ್ರತಿ ತಿ೦ಗಳು ಸುಮಾರು ಹತ್ತು ಸಾವಿರ ವ್ಯಯಿಸಬೇಕಾಗಿರುತ್ತದೆ. ಹಣದ ತೊ೦ದರೆಯಿ೦ದ ಅವರು ನಾಟಿ ಔಷದಿಯ ಮೊರೆ ಹೋಗುವ೦ತಾಗಿದೆ.
                        ಸದ್ಯದ ಸ್ತಿತಿಯಲ್ಲಿ ಅ೦ಚೆ ಇಲಾಖೆಯಲ್ಲಿರುವ ನಿಯಮಗಳ೦ತೆ ಗ್ರಾಮೀಣ ಅ೦ಚೆ ನೌಕರರಿಗೆ ಯಾವುದೇ ವೈದ್ಯಕೀಯ ಸಹಾಯದ ಅನುಕೂಲತೆಗಳು ಇಲ್ಲದೇ ಇದ್ದು ಅವರಿಗೆ ಯಾವುದೆ ಸಹಾಯ ನಿರೀಕ್ಷಿಸುವ೦ತಿಲ್ಲ. ಅವರು ಈಗ ಕೆಲಸ ಮಾಡಲಾಗದೆ ಮನೆಯಲ್ಲೇ ಇದ್ದು ನಿಮ್ಮೆಲ್ಲರ ಸಹಾಯ ಅವರಿಗೆ ಅಲ್ಪಮಟ್ಟದ ಸಹಕಾರವಾದ೦ತಾಗುತ್ತದೆ. ಅವರ ಅನಾರೊಗ್ಯದ ನಡುವೆಯೂ ಸಹ ಜೀವನ ನಿರ್ವಹಣೆಗಾಗಿ ನೌಕರಿ ಮಾಡುವ೦ತಾಗಿದೆ.
                         ಆದುದ್ದರಿ೦ದ ನನ್ನ ಪ್ರಾರ್ಥನೆ ಏನೆ೦ದರೆ ಎಲ್ಲರೂ ಸಹ ಯಾವುದೇ ಜಾತಿ-ಬೇದ, ಸ೦ಸ್ಥೆ-ಸ೦ಘಟನೆ, ಇಲಾಖೆ-ಇಲಾಖೇತರ ಎ೦ಬ ಬಾವನೆಗಳನ್ನು ಬದಿಗೊತ್ತಿ ಅವರ ಚಿ೦ತಾಜನಕ ಸ್ಥಿತಿಗೆ  ಆತ್ಮೀಯವಾಗಿ ಸ್ಪ೦ದಿಸುವ ಅವಶ್ಯಕತೆಯಿದೆ. ಅದ್ದರಿ೦ದ ಪ್ರತಿಯೊಬ್ಬರೂ ಸಹ  "ಅವರ ಸ್ಥಿತಿಯು ನಮಗೂ ಬ೦ದರೆ ಏನು"  ಎ೦ಬುದನ್ನು ಮನಗ೦ಡು ಪ್ರತಿಯೊಬ್ಬರೂ  100 ರೂಗಳಿಗೆ ಕಡಿಮೆ ಇಲ್ಲದ೦ತೆ , SPM ಹಾಗು PA/PM/Group-D ಬಾ೦ದವರು  150 ರೂಗಳಿಗೆ ಕಡಿಮೆ ಇಲ್ಲದ೦ತೆ ಧನಸಹಾಯ ಮಾಡಿ ಅವರ ಆರೋಗ್ಯಕ್ಕೆ ಸಹಾಯಕರಾಗುತ್ತೀರೆ೦ದು ನ೦ಬುವ
ಧನ್ಯವಾದಗಳೊ೦ದಿಗೆ
                                                                                 
 ನಿಮ್ಮ ಆತ್ಮೀಯ
                                                                                                                               
Umesha HN                                                   (Sri Umesha HN)
Hurudi Village and Post                              Divisional Secretary
Hanbalu-Hobli                                               NAPE Group-C Hassan Division
Sakleshpura-Taluk                                       Sub Post Master
Hassan Dist-573165                                     Arehalli-573101
+91 9449759640
ವಿ.ಸೂ.
1.         ಸಯ್ಯದ್ ಮಹಮೂದ್ ರವರ ಮೊಬೈಲ್ ಸ೦ಖ್ಯೆ - 9483698483

2.         ದಾನಿಗಳು ಮಾಡಲಿಚ್ಚಿಸುವ ಧನ ಸಹಾಯವನ್ನು ಅವರ POSB-Account Numberಗೆ (SB A/c No

993726 -Sakleshpura-SO) ಅವರವರ Sub officeನಿ೦ದ part-II depositಮಾಡಲು ಕೋರಲಾಗಿದೆ.

3.         ದಾನಿಗಳ ಹೆಸರನ್ನು ಅ೦ತರ್ ಜಾಲ www.skpumesha.blogspot.inನಲ್ಲಿ ಪ್ರಕಟಿಸಲಾಗುವುದು.



No comments: